ಭಾರತೀಯ ಮುಸಲ್ಮಾನರು ಹಿಂದೆಂದೂ, ಮುಂದೆಂದಿಗೂ ತಮ್ಮ ನಾಯಕನೆಂದು ಒಪ್ಪಿಕೊಳ್ಳದ "ಜಿನ್ನಾ" ಎಂಬ ಅತೃಪ್ತ ಆತ್ಮದಿಂದ ಸೃಷ್ಟಿಯಾದ ಪಾಕಿಸ್ತಾನದ ಈಗಿನ ಮತ್ತು ಈವರೆಗಿನ ಸ್ಥಿತಿಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ದುರಂತವೆಂದರೆ ಅದೇ ತಿರುಬೋಕಿ 'ಜಿನ್ನಾ'ನ ಪ್ರೇತಾತ್ಮವನ್ನು ಆವಾಹಿಸಿಕೊಂಡ ಕೆಲವು ಶಕ್ತಿಗಳು ನಮ್ಮ ದೇಶ ಒಡೆಯಲು ಸನ್ನದ್ದವಾಗಿವೆ.
ಬೆನ್ನು ಬಿಡದ ಬೇತಾಳನಂತೆ ಮುಸ್ಲಿಮರ ದೇಶಪ್ರೇಮವನ್ನು ಸಂಶಯದಿಂದ ನೋಡುವ, ತಾವು ಮಾತ್ರ ದೇಶಭಕ್ತರು ಎಂದು ಬೀಗುವ ಈ ಪ್ರೇತಾತ್ಮಗಳಿಗೆ ಆದಷ್ಟು ಬೇಗ ಮೋಕ್ಷ ಸಿಕ್ಕಿ ನೈಜ ಭಾರತೀಯರಿಗೆಲ್ಲ ಅಜರಾಮರ ಶಾಂತಿ ಸಿಗಲಿ.
ಇನ್ನಾದರೂ ನಾವು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆ-ಬಡಿದು ಸಾಯುದಕ್ಕಿಂತ, ಕೈ ಕೈ ಜೋಡಿಸಿ,ಅಪನಂಬಿಕೆಗಳನ್ನು ದೂರಸರಿಸಿ,ಈ ದೇಶವನ್ನು ಪ್ರಗತಿ ಮತ್ತು ಶಾಂತಿಯ ಕಡೆಗೆ ಮುನ್ನಡೆಸೋಣ. ನೆಮ್ಮದಿಯಿಂದ ಬದುಕುವ ಸನ್ಮನಸ್ಸು ತೋರೋಣ.
ಜೈ ಹಿಂದ್
#ಉಫಾಕು # ಪಾರ್ ಬೆಟರ್ ಇಂಡಿಯಾ #
0 ಕಾಮೆಂಟ್ಗಳು