ಬೇಕೂಪರು.....!!
ಲೋಕ ನೋಡಬಾರದೆಂದು
ನನ್ನ ಕಣ್ಣು ಕಿತ್ತರು.
ಮತ್ತೆಂದೂ ಮೇಲೇಳೆಬಾರದೆಂದು
ನನ್ನೆಲ್ಲವನ್ನೂ ದೋಚಿ,
ಹೋಗಿ ಬಿಟ್ಟರು.!
ಆದರೆ ....
ಪ್ರತಿ ದಿನ ಮೊಳಕೆಯೊಡೆಯುವ
ನನ್ನ ಮನಸ್ಸಿನೊಳಗಿನ
ಕನಸುಗಳ ಕೀಳಲಾಗದೆ,
ಹೃದಯದೊಳಗೆ ಬಚ್ಚಿಟ್ಟ
ನೆನಪುಗಳ ದೋಚಲಾಗದೆ,
ಸೋತು ಬಿಟ್ಟರು..!
ನನ್ನ ಮೇಲೆ ನಿನಗೆ
ನಂಬಿಕೆ ಯಾಕೆ ಇಲ್ಲ ?
ಎಂದು ಬರೆದಳು ..
ಅದನ್ನು ತನ್ನ
ಇಬ್ಬರು ಪ್ರಿಯತಮರಿಗೆ
ಕಳಿಸಿದಳು...
ಕೆಲವರು ಇತರರ ಹೃದಯದಲ್ಲಿ
ಉಳಿದು ದೊಡ್ದವರಾಗಿರ್ತಾರೆ.
ಇನ್ನು ಕೆಲವರು
ಇತರರ ಹೃದಯವನ್ನು
ತುಳಿದು ದೊಡ್ದವರಾಗ್ತಾರೆ.
ಮೊದಲನೆಯದು ಶಾಶ್ವತ .
ಎರಡನೆಯದು ಕ್ಷಣಿಕ.
0 ಕಾಮೆಂಟ್ಗಳು